ಭಾನುವಾರ, ನವೆಂಬರ್ 25, 2012

ಸುಮನ ದುರ್ಮನ ರೋಗ ತನುವಚನದ ರೋಗ ???




ಸುಮನ ದುರ್ಮನ ರೋಗ ತನುವಚನದ ರೋಗ
ಕ್ರಮಜಾಡ್ಯಪರಿದೋಡುವುದು
ಶ್ರಮಿಸಲು ಶಾರೀರಶ್ರಮವೆದ್ದು ನಿಲ್ಲಲು
ನಮಗೊಪ್ಪಿಸುವ ಧರ್ಮ ಸಿದ್ಧಿ



ಶನಿವಾರ, ನವೆಂಬರ್ 24, 2012

ಖಳರ ಕಾವ್ಯಕೆ ಧಿಹ್ ಕಾರ ???



ಲಲಿತಾಯುರ್ವೇದವೆಲ್ಲವು ಹುಟ್ಟಿತಿಲ್ಲಿಂದ
ಇಳೆಯವರೆಲ್ಲವಿಲ್ಲಿಂದ
ಬಳಸುತಜೀವಹಿಂಸೆಯಸೇರಿಸಿತಂದ
ಖಳರ ಕಾವ್ಯಕೆ ಧಿಹ್ ಕಾರ

ಗುರುವಾರ, ನವೆಂಬರ್ 22, 2012

ಅಷ್ಟಮಹಾಪ್ರಾತಿಹಾರ್ಯ ವೈಭವ



ಅಷ್ಟಮಹಾಪ್ರಾತಿಹಾರ್ಯ ವೈಭವದಿಂದ
ಅಷ್ಟಗುಣಂಗಳೊಳ್ ಓಂದಮ್
ಸೃಷ್ಟಿಗೆ ಮಂಗಲ ಪರ್ಯಾಯದಿನಿತ್ತ
ಅಷ್ಟಮಜಿನಗೆರಗುವೆನು

ಜಿನಚಕ್ರಬಂಧ



ಹರಚಕ್ರ ಬಂಧವು ಜಿನಚಕ್ರಬಂಧದೊಳ್
ಸರುವಾಂಕ ಚಕ್ರಬಂಧವಂಗಿರಿ
ಧರವರ್ಗದೊಳ್ ತಿರುಗಿಸಲೊಂದೇ
ಅರುವತ್ನಾಲ್ಕಂಕ ಭೂವಲಯ

ಮಂಗಳವಾರ, ನವೆಂಬರ್ 20, 2012

ಗುಣವೃದ್ಧಿಯಾಗುವ ಗಣಿತವನರಿಯದೆ



ಗುಣವೃದ್ಧಿಯಾಗುವ ಗಣಿತವನರಿಯದೆ
ಅಣುಪರಮಾಣುಜೀವಗಳ
ಅಣಕದಿಂಪುಟ್ಟುವ ವಿಪರೀತರೋಗದಾ
ಎಣಿಕೆಯನರಿಯಲಶಕ್ಯ

ಗಣಿತೌಷಧ



ಮಣಿಶಿಲೆ ತುತ್ತವು ಮಂಡೂರ ಕಿಟ್ಟವು
ಗುಣಹಾನಿಯಾಗದೆ ಅಮೃತ
ದಣುವಾಗಬೇಕಾಗಿಹ ಗಣಿತೌಷಧ
ಗಣಿತವಿಲ್ಲದೆ ಬರದರಿಯೈ

ಸೋಮವಾರ, ನವೆಂಬರ್ 19, 2012

ಸರುವಾಂಕ ಚಕ್ರಬಂಧ



ಹರಚಕ್ರ ಬಂಧವು ಜಿನಚಕ್ರಬಂಧದೊಳ್
ಸರುವಾಂಕ ಚಕ್ರಬಂಧವಂಗಿರಿ
ಧರವರ್ಗದೊಳ್ ತಿರುಗಿಸಲೊಂದೇ
ಅರುವತ್ನಾಲ್ಕಂಕ ಭೂವಲಯ

ಶುಕ್ರವಾರ, ನವೆಂಬರ್ 16, 2012

ನಾಗಾರ್ಜುನ ಸಿದ್ಧ ಕಾವ್ಯ ???



ಹೇಗೆಯು ತಪ್ಪದ ಯೋಗ
ನಾಗಾರ್ಜುನ ಸಿದ್ಧ ಕಾವ್ಯ
ಆಗಿರ್ದ ಕಕ್ಷ ಪುಟಾಂಕ
ಶ್ರೀ ಗುರುವರ ಸೇನಗಣದಿ

ಮಹವೀರ ತಲೆಕಾಚ ಗಂಗ ???


ಮಹಿಮೆಯ ಕಳ್ವಪ್ಪು ಕೋವಳಲಾ
ಮಹವೀರ ತಲೆಕಾಚ ಗಂಗ
ಮಹದಾದಿ ಶಿವಭದ್ರ ಭರತ
ಮಹಿಮೆಯ ಮಂಗಲ ಭೂವಲಯ

ಸ್ವರ್ಣ ಸಿದ್ಧಾಂತ



ಆಗ ಬಾಳಿದ ಶಿವಾಯನನ
ರೋಗವಕೆಡಿಸಿದ ಕಾವ್ಯ
ನಾಗ ಮಲ್ಲಿಗೆ ಕೃಷ್ಣ ಪುಷ್ಪ
ತಾಗಲು ಸ್ವರ್ಣ ಸಿದ್ಧಾಂತ

ಗುರುವಾರ, ನವೆಂಬರ್ 15, 2012

ಈಧಿ ವ್ಯಾಧಿಗಳ ಸಂಹಾರ




ಈಧಿ ವ್ಯಾಧಿಗಳೆಲ್ಲ ಸಂಹಾರವಾಗುವ
ಆದಿಯ ಚಕ್ರಬಂಧಗಳ
ಸಾಧಿಪ ಜಯಸಿದ್ಧ ಬಾರತ ಯುದ್ಧ
ದಾದಿಯ ಕಾವ್ಯ ಭೂವಲಯ

ಬುಧವಾರ, ನವೆಂಬರ್ 14, 2012

ಕರಗದೆ ತೋರುವನಂತ



ಹರಡುತ ತಂಗುತಬೆರೆಯುತ ಹರಿಯುತ
ಸರುವಪುದ್ಗಲ ಹೊಂದಿಸರಲಂ
ಬರುತ ಹೋಗುತ ನಿಲ್ವ ಜೀವರಾಶಿಗಳಂಕ
ಕರಗದೆ ತೋರುವನಂತ

ಮಂಗಳವಾರ, ನವೆಂಬರ್ 13, 2012

ಸಹನೆಯ ಧರ್ಮ ನಿರಾಕುಲವೆನ್ನುವ ಮಹಿಮೆಯಂಕಾಕ್ಷರ ವಾಣಿ


ಮಹವೀರ ದೇವನವಾಣಿಯಿಂಬಂದಿಹ
ಮಹಿಮೆಯ ಭದ್ರಸೌಕ್ಯವು ಶ್ರೀ
ಸಹನೆಯ ಧರ್ಮ ನಿರಾಕುಲವೆನ್ನುವ
ಮಹಿಮೆಯಂಕಾಕ್ಷರ ವಾಣಿ

ಭಾನುವಾರ, ನವೆಂಬರ್ 11, 2012

ಈ ದಿನ ಹಿಂದಿನ ಮುಂದಿನನಂತದ


ಈ ದಿನ ಹಿಂದಿನ ಮುಂದಿನನಂತದ
ದಾದ್ಯಂತವಳೆಯುವಗೀತೆ
ಸಾಧಿಸಿತಂದಿಹ ಭೋಗಯೋಗದ
ಶ್ರೀ ದಿವಮನ್ಮಥಕಾವ್ಯ

ಭೋಗ ಯೋಗದ ಶ್ರೀ ದಿವಮನ್ಮಥಕಾವ್ಯ




ಈ ದಿನ ಹಿಂದಿನ ಮುಂದಿನನಂತದ
ದಾದ್ಯಂತವಳೆಯುವಗೀತೆ
ಸಾಧಿಸಿತಂದಿಹ ಭೋಗಯೋಗದ
ಶ್ರೀ ದಿವಮನ್ಮಥಕಾವ್ಯ



ಶನಿವಾರ, ನವೆಂಬರ್ 10, 2012

ಕನ್ನಡದ ಅಂಕಗಳು ಹುಟ್ಟಿದ ಬಗೆ




ಕನ್ನಡದೊಂದೆರಳ್ ಮೂರು ನಾಲ್ಕೈದು
ಆರೇಳೆಂಟು ಒಂಬತ್ತೆಂಬ
ಉನ್ನತವಾದಂಕ ಸೊನ್ನೆಯಿಂಹುಟ್ಟಿ 
ತೆಂದೆನುವುದನು ಕಲಿಸಿದನು

ಅರೆರಾಶಿಯಲ್ಲವೆ ಜಗದ ಸೌಖ್ಯವಸ್ತು ???


ಅರೆರಾಶಿಯಲ್ಲವೆ ಜಗದ ಸೌಖ್ಯವಸ್ತು
ಅರೆರಾಶಿ ದುಃಖವಸ್ತುವರಿ
ಮರೆಯದೆ ಬಾಳಗವಕೆಪರಿಪೂರ್ಣವದರಿಂದ
ಅರೆಯನಾಶಿಪ ಲಾಭವದುನಂ

ಗುರುವಾರ, ನವೆಂಬರ್ 8, 2012

ಅತಿಶಯಧವಲ


ಣಿಜದ ತತ್ವ ಏಳರಭಾಜಿತದಿಂಬಂದ
ಅಜನಾದಿ ದೇವನವಾಣಿ
ಬಿಜದ್ವಯವಿಜಯಧವಲಂಕರಾಶಿಯ
ಸ್ರುಜಿಸಿದತಿಶಯಧವಲ

ಭರತಖಂಡದ ಶುಭ ಚಿಹ್ನೆ



ಕರುಣೆಯ ಧವಲವರ್ಣದ ಪಾದಗಳಿಹ
ಪರಮಾತ್ಮಪಾದದ್ವಯದೆ
ಸಿರವಿಹ ನಾಲ್ಕಂಕವೆರಸಿ ಸಿಂಹದ ಮುಖ
ಭರತಖಂಡದ ಶುಭ ಚಿಹ್ನೆ

ಮಂಗಳವಾರ, ನವೆಂಬರ್ 6, 2012

ಗುರುವರ ವೀರಸೇನರ ಶಿಷ್ಯ ಕುಮುದೇಂದು




ವರ ವಿಶ್ವಕಾವ್ಯದೊಳಡಗಿರ್ಪ ಕಾರಣ
ಸರಣಿಯನರಿತವರ್ ಶುಭದ
ಗುರುವೀರಸೇನರ ಶಿಷ್ಯ ಕುಮುದೇಂದು
ಗುರುವಿರಚಿತದಾದಿ ಕಾವ್ಯ

ವಿಜಯಧವಲದ ಭೂವಲಯ




ಣಿಜದ ಹತ್ತನು ಆತ್ಮಧರ್ಮವನಾಗಿಸಿಕೊಂಡ
ಭಜಕರ್ಗೆ ಶ್ರೀವಿಂಧ್ಯಗಿರಿಯ
ನಿಜತತ್ವವೇಳರ ದರ್ಶನವಿತ್ತ
ವಿಜಯಧವಲದ ಭೂವಲಯ

ಸೋಮವಾರ, ನವೆಂಬರ್ 5, 2012


ಮಣಿಸ್ವರ್ಣ ರಜತಪಾರದ ಗಂಧಕಾದಿಯ
ಕ್ಷಣದೊಳು ಭಸ್ಮವಾಗಿಸುವ
ಗಣನೆಯ ಹೂವಿನಾಯುರ್ವೇದ ವಿದ್ಯೆಗೆ
ಮಣಿನವಜಲಜದಪಂಕ

ಹೂವಿನಾಯುರ್ವೇದ





ಮಣಿಸ್ವರ್ಣ ರಜತಪಾರದ ಗಂಧಕಾದಿಯ
ಕ್ಷಣದೊಳು ಭಸ್ಮವಾಗಿಸುವ
ಗಣನೆಯ ಹೂವಿನಾಯುರ್ವೇದ ವಿದ್ಯೆಗೆ
ಮಣಿನವಜಲಜದಪಂಕ

ಭಾನುವಾರ, ನವೆಂಬರ್ 4, 2012

ಟವಣೆ ಕೋಲು




ಟವಣೆಯೊಳಕ್ಷರದಂಕವ ಸ್ಥಾಪಿಸಿ
ದವಯವವದೆ ಮಹಾವ್ರತವು
ಅವರವರಿಗೆ ತಕ್ಕ ಶಕ್ತಿಗೆ ವರವಾದ
ನವಮಂಗಲದ ಭೂವಲಯ